ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ! ನಮ್ಮ ತಪ್ಪನೆನಿತೋ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ; ನೀನೆ ಕಣಾ ನಮ್ಮ ಬಾಳ್ವೆ, ನಿನ್ನಕರೆಯಲಮ್ಮೆವು! ತನು ಕನ್ನಡ, ಮನ ಕನ್ನಡ, ನುಡಿ ಕನ್ನಡೆಮ್ಮವು. ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ, ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ, ತೆನೆಯ ಕೆನೆಯ ಗಾಳಿಯೊ. ಖಗಮೃಗೋರಗಾಳಿಯೊ, ನದಿನಗರನಗಾಳಿಯೊ! ಇಲ್ಲಿಲ್ಲದುದುಳಿದುದೆ? ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ? ಬುಗರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ? ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ? ಪಾಂಡವರಜ್ಞಾತಮಿದ್ದ, ವಲಲಂ ಕೀಚಕನ ಗೆದ್ದ, ಕುರುಕುಲು ಮುಂಗದನಮೆದ್ದ ನಾಡು ನೋಡಿದಲ್ಲವೆ? ನಂದನಂದನನಿಲ್ಲಿಂದ ಸಂದಿಗಯ್ದನಲ್ಲವೆ? ಶಕವಿಜೇತನಮರ ಶಾತವಾಹನಾಖ್ಯನೀ ಶಕಂ ನಿನ್ನೊಳಂದು ತೊಡಗಿ ಸಂದುದರ್ಧ ಭತದೇಶಕಂ! ಚಾಳುಕ್ಯ ರಾಷ್ಟ್ರಕೂಟರೆಲ್ಲಿ, ಗಂಗರಾ ಕದಂಬರೆಲ್ಲಿ, ಹೊಯ್ಸಳ ಕಳಚುರ್ಯರೆಲ್ಲಿ, ವಿಜಯನಗರ ಭೂಪರು ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು? ಜೈನರಾದ ಪೂಜ್ಯಪಾದ ಕೊಂಡಕುಂದ ವರ್ಯರ, ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ, ಶರ್ವ ಪಂಪ ರನ್ನರ, ಲಕ್ಷೀಪತಿ ಜನ್ನರ, ಷಡಕ್ಷರಿ ಮುದ್ದಣ್ಣರ, ಪುರಂದರ ವರೇಣ್ಯರ, ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ! ಹಳೆಯ ಬೀಡ ಬೆಲನಾಡ ಮಾಡಮೆನಿತೊ ಸುಂದರಂ! ಬಿಳಿಯ ಕೊಳದ ಕಾ